ಶಿಬಿರಾಗ್ನಿಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳ ಸಮೂಹ ನೃತ್ಯ ಸ್ಪರ್ಧೆ
ದಿನಾಂಕ 24-01-15-ರಂದು
ಮುಂಜಾನೆ ಶಿಬಿರಾರ್ಥಿಗಳಿಂದ ಪಥಸಂಚಲನ ಸ್ಪರ್ಧೆ ನಡೆಯಿತು.
ನಂತರ
ಧ್ವಜಾರೋಹಣ, ಗುಡಾರ ಪರಿಶೀಲನೆ ಬಲಪಡಿಸುವ ಚಟುವಟಿಕೆ ನಡೆಯಿತು.
ಸಾಹಸ,ಧೈರ್ಯ ಹಾಗೂ ಆತ್ಮ ವಿಶ್ವಾಸ
ಮೂಡಲು; ವಿದ್ಯಾರ್ಥಿಗಳು ಸ್ಕೌಟ್ & ಗೈಡ್ ನ ಸಾಹಸಮಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು
ನಿವೃತ್ತ ಅಧ್ಯಾಪಕಾರಾದ ಶ್ರೀ ರಾಧಾಕೃಷ್ಣ ಬಲ್ಲಾಳ್ (H.W.B.SCOUTS) ಇವರು ಎಡ್ವಂಚರ್ ಪಾರ್ಕ್ ಉದ್ಘಾಟಿಸಿ
ಮಾತನಾಡಿದರು.ತಾವೇ ಸ್ವತಃ ಈ ಸಾಹಸಮಯ ಚಟುವಟಿಕೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
.
ದೇಶಕ್ಕಾಗಿ ದುಡಿಯುವ,ದೇಶಸೇವೆ ಮಾಡುವ ಎಂಬ ಐಕ್ಯತಾ ಘೋಷಣೆಯೊಂದಿಗೆ,ಸಾಮಾಜಿಕ
ಐಕ್ಯತೆ,ದೇಶಪ್ರೇಮ,ಪರಿಸರ ಪ್ರಜ್ಞೆಯನ್ನು ಮೂಡಿಸುವ ಸಂದೀಶವನ್ನು ಸಾರುವ ಐಕ್ಯತಾ ಮೆರವಣಿಗೆ
ನಡೆಯಿತು. ನಿವೃತ್ತ ಅಧ್ಯಾಪಕಾರಾದ ಶ್ರೀ ರಾಧಾಕೃಷ್ಣ ಬಲ್ಲಾಳ್ (H.W.B.SCOUTS), ಸ್ಕೌಟ್
ತರಬೇತುದಾರರು,ವರ್ಕಾಡಿ ಪಂಚಾಯತಿನ
ಜನ
ಪ್ರತಿನಿಧಿಗಳು, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು,ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು,ಯಸ್,ಯಸ್,ಜಿ
ಸದಸ್ಯರು,ಮಂಜೇಶ್ವರ ಉಪಜಿಲ್ಲಾಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಘಟನಾ ಸಮಿತಿ ಹಾಗೂ ಉಪ
ಸಮಿತಿಯ ಪದಾಧಿಕಾರಿಗಳು,ಹಾಗೂ ಸದಸ್ಯರು,ಉಉರ ಮಹನೀಯರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಪ್ರತೀ ಶಾಲೆಯ ತಂಡದಿಂದ ಅಡುಗೆ ತಯಾರಿ ಸ್ಪರ್ಧೆ ನಡೆಯಿತು. |
No comments:
Post a Comment