welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 26 January 2015

ಸಮಾರೋಪ ಸಮಾರಂಭ



BHARAT SCOUT ES & GUIDES  RALLY ಯ ಸಮಾರೋಪ ಸಮಾರಂಭವು ಮಂಜೇಶ್ವರ ಬ್ಲೋಕ್ ಪಂಚಾಯತಿನ  ಅಧ್ಯಕ್ಷರಾದ Smt.Mumtaz Sameera ಇವರ ಘನ ಅಧ್ಯಕ್ಷತೆಯಲ್ಲಿ ಬಾಕ್ರಬೈಲು ಶಾಲಾ ವೇದಿಕೆಯಲ್ಲಿ ಜರಗಿತು.ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ "ಮಕ್ಕಳ ಸ್ವಯಂ ರಕ್ಷಣೆಗೆ, ಸಮಯ ಪಾಲನೆಗೆ, ಶಿಸ್ತಿನಿಂದ ಜೀವನ ನಡೆಸಲು, ಈ ಸ್ಕೌಟ್ ಶಿಬಿರವು ಸಹಾಯಕವಾಗಿದೆ ಈ ನಿಟ್ಟಿನಲ್ಲಿ ರಕ್ಷಕರ ಪಾತ್ರ ಮಹತ್ತರವಾಗಿದೆ.ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುವಂತಾಗಲಿ" ಎಂದು ಹೇಳಿದರು. ತರುವಾಯ ಮುಖ್ಯ ಅತಿಥಿಗಳಾದ ಶ್ರೀಮತಿ ಭಾರತಿ ಯಸ್,ಅಭಿವೃದ್ಧಿ ಸ್ಥಾಯಿ ಸಮಿತಿ ವರ್ಕಾಡಿ ಗ್ರಾಮ ಪಂಚಾಯತ್ ಇವರು ತಮ್ಮ ಭಾಷಣದಲ್ಲಿ ಇಂದಿನ ವಿದ್ಯಾರ್ಥಿಗಳು ಕಷ್ಟವನ್ನು ಹೇಗೆ ಸಮರ್ಥವಾಗಿ ಎದುರಿಸಬಹುದು,ದೇಶಪ್ರೇಮವನ್ನು ಹೇಗೆ ಬೆಳೆಸಬಹುದು,ಎಂಬುದನ್ನು ಸ್ಕೌಟ್ ತರಬೇತಿ ಮೂಲಕ ಪಡೆದು,ತಮ್ಮ ಜೀವನದಲ್ಲಿ ಅಳವಡಿಸಿ,ದೇಶದ ಉತ್ತಮ ಪ್ರಜೆಗಳಾಗಲಿ ಎಂದು ಆಶಿಸಿದರು.
ಮಂಜೇಶ್ವರ ಬ್ಲೋಕ್ ಪಂಚಾಯತಿನ  Welfare Standing cammittee Chairman Sri Moosa kunhi,ವರ್ಕಾಡಿ ಗ್ರಾಮ ಪಂಚಾಯತಿನ ಸದಸ್ಯರಾದ Sri Razak kedambadi, ಬಾಕ್ರಬೈಲು ಶಾಲಾ ಯಂ.ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಆರ್ವಾರ್, ಜಿಲ್ಲಾ ಸ್ಕೌಟ್ ಸಹಾಯಕ ಕಮಿಷನರ್  ಶ್ರೀ ಚೇವಾರ್ ವಿನೋದ್ ಇವರು ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಉಮಾವತಿ ಪಿ ಸಾಂತಾ,ನಿವೃತ್ತ ಅದ್ಯಾಪಕರು ಹಾಗೂ ಕಾಸರಗೋಡು ಜಿಲ್ಲೆಯ ಹಿರಿಯ ಸ್ಕಾಟ್ ತರಬೇತುದಾರರಾದ ಶ್ರೀ ವಿಶ್ವನಾಥ ಆಳ್ವ, ಬಾಕ್ರಬೈಲು ಶಾಲಾ
ಮೇನೇಜರ್ ಶ್ರೀ ಪಿ.ಮೋಹನ್ ರಾವ್, ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್,
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್, ಉಪಸ್ಥಿತರಿದ್ದರು.ಬಳಿಕ ವಿವಿಧ ಶಾಲೆಗಳಿಂದ ಆಗಮಿಸಿ ಈ  RALLY ಯಲ್ಲಿ ಭಾಗವಹಿಸಿದ ಸ್ಕಾಟ್ & ಗೈಡ್ ಟ್ರೂಪಿನ ತರಬೇತುದಾರರಿಗೆ ಶಾಲಾ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಬಳಿಕ ಶಿಬಿರಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ನೀಡಿದರು. ವಿನೋದ್ ಚೇವಾರ್  (Asst.Dist.Commissioner Scouts) ಇವರು ಅಭಿನಂದನಾ ಭಾಷಣ ಮಾಡಿ ಬಾಕ್ರಬೈಲು ಶಾಲೆಗೆ ಸ್ಮರಣಿಕೆ ನೀಡಿದರು. ಶಾಲಾ ಸ್ಟಾಪ್ ಸೆಕ್ರೆಟರಿಯಾದ ಅಬ್ದುಲ್ ಖಾದರ್ ಪಿ.ಕೆ.ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಸಹಾಯಕ ಅಧ್ಯಾಪಕರಾದ ಶ್ರೀ. ಬಿ.ಮೋಹನ ಇವರು ಕಾರ್ಯಕ್ರಮ ನಿರೂಪಿಸಿದರು. Secretary , Bharat Scouts & Guides Manjeshwar Local Association Sri Peter Rodrigues ಇವರು ಸ್ಕೌಟ್ ಶಿಬಿರದ ಕಾರ್ಯಚಟುವಟಿಕೆಗಳ ಸಮಗ್ರ ವರದಿಯನ್ನು ವಾಚಿಸಿ ಧನ್ಯವಾದ ಸಮರ್ಪಿಸಿದರು. 








Sunday 25 January 2015

ಶಿಬಿರಾಗ್ನಿ



ಶಿಬಿರಾಗ್ನಿಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳ ಸಮೂಹ ನೃತ್ಯ ಸ್ಪರ್ಧೆ















ದಿನಾಂಕ 24-01-15-ರಂದು ಮುಂಜಾನೆ ಶಿಬಿರಾರ್ಥಿಗಳಿಂದ ಪಥಸಂಚಲನ ಸ್ಪರ್ಧೆ ನಡೆಯಿತು.
ನಂತರ ಧ್ವಜಾರೋಹಣ, ಗುಡಾರ ಪರಿಶೀಲನೆ ಬಲಪಡಿಸುವ ಚಟುವಟಿಕೆ ನಡೆಯಿತು.





        ಸಾಹಸ,ಧೈರ್ಯ ಹಾಗೂ ಆತ್ಮ ವಿಶ್ವಾಸ ಮೂಡಲು; ವಿದ್ಯಾರ್ಥಿಗಳು ಸ್ಕೌಟ್ & ಗೈಡ್ ನ ಸಾಹಸಮಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ನಿವೃತ್ತ ಅಧ್ಯಾಪಕಾರಾದ ಶ್ರೀ ರಾಧಾಕೃಷ್ಣ ಬಲ್ಲಾಳ್ (H.W.B.SCOUTS) ಇವರು ಎಡ್ವಂಚರ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು.ತಾವೇ ಸ್ವತಃ ಈ ಸಾಹಸಮಯ ಚಟುವಟಿಕೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. 






























. ದೇಶಕ್ಕಾಗಿ ದುಡಿಯುವ,ದೇಶಸೇವೆ ಮಾಡುವ ಎಂಬ ಐಕ್ಯತಾ ಘೋಷಣೆಯೊಂದಿಗೆ,ಸಾಮಾಜಿಕ ಐಕ್ಯತೆ,ದೇಶಪ್ರೇಮ,ಪರಿಸರ ಪ್ರಜ್ಞೆಯನ್ನು ಮೂಡಿಸುವ ಸಂದೀಶವನ್ನು ಸಾರುವ ಐಕ್ಯತಾ ಮೆರವಣಿಗೆ ನಡೆಯಿತು. ನಿವೃತ್ತ ಅಧ್ಯಾಪಕಾರಾದ ಶ್ರೀ ರಾಧಾಕೃಷ್ಣ ಬಲ್ಲಾಳ್ (H.W.B.SCOUTS), ಸ್ಕೌಟ್ ತರಬೇತುದಾರರು,ವರ್ಕಾಡಿ ಪಂಚಾಯತಿನ  
ಜನ ಪ್ರತಿನಿಧಿಗಳು,ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು,ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು,ಯಸ್,ಯಸ್,ಜಿ ಸದಸ್ಯರು,ಮಂಜೇಶ್ವರ ಉಪಜಿಲ್ಲಾಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಘಟನಾ ಸಮಿತಿ ಹಾಗೂ ಉಪ ಸಮಿತಿಯ ಪದಾಧಿಕಾರಿಗಳು,ಹಾಗೂ ಸದಸ್ಯರು,ಉಉರ ಮಹನೀಯರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
 ಪ್ರತೀ ಶಾಲೆಯ ತಂಡದಿಂದ ಅಡುಗೆ ತಯಾರಿ ಸ್ಪರ್ಧೆ ನಡೆಯಿತು.



























ಉದ್ಘಾಟನಾ ಸಮಾರಂಭ






      ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ಸಾಹಸಮಯ ಚಟುವಟಿಕೆಗಳನ್ನು ನಡೆಸಲು ಈ ಸ್ಕೌಟ್ ಶಿಬಿರವು ಒಂದು ಉತ್ತಮ ವೇದಿಕೆಯಾಗಲಿ ಮಂಜೇಶ್ವರ ಉಪಜಿಲ್ಲಾಮಟ್ಟದ BHARAT SCOUT ES & GUIDES  RALLY ಯನ್ನು ಉದ್ಘಾಟಿಸಿ  ವರ್ಕಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಉಮಾವತಿ ಪಿ.ಸಾಂತ ಮಕ್ಕಳಿಗೆ ಕರೆ ನೀಡಿದರು. 




    ಮಂಜೇಶ್ವರ  ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಗಳಾದ ಶ್ರೀ ನಂದಿಕೇಶನ್ ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ BHARAT SCOUT ES & GUIDES  RALLY ಯ ಧ್ಯೇಯೋದ್ದೇಶಗಳು ಹಾಗೂ ಶಿಬಿರಾರ್ಥಿಗಳ ದೇಶಪ್ರೇಮ, ಸಮಯಪ್ರಜ್ಞೆ, ಕರ್ತವ್ಯನಿಷ್ಠೆ, ಸಹಕಾರ ಮನೋಭಾವ ಇವೇ ಮೊದಲಾದ ಗುಣಗಳನ್ನು ಬೆಳೆಸುವಂತಾಗಲು ಇದೊಂದು ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
      ಅತಿಥಿಗಳಾಗಿ ಆಗಮಿಸಿದ ವರ್ಕಾಡಿ ಗ್ರಾಮ ಪಂಚಾಯತಿನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್ ಆದ ಶ್ರೀಮತಿ ಸುಲೋಚನ ಸಿ.ಶೆಟ್ಟಿ ಇವರು ಈ ಸ್ಕೌಟ್ ಶಿಬಿರವು ಯಶಪ್ರದವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

       ನಿವೃತ್ತ ವಿದ್ಯಾಧಿಕಾರಿಗಳು ಹಾಗೂ  ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಘಟನೆಯ ಉಪಾಧ್ಯಕ್ಷರಾದ ಶ್ರೀ ಯಂ.ಜಿ.ನಾರಾಯಣ್ ರಾವ್, ಬಾಕ್ರಬೈಲು  ಶಾಲಾ ಮೇನೇಜರ್ ಶ್ರೀ ಪಿ.ಮೋಹನ್ ರಾವ್, ಮಂಜೇಶ್ವರ ಬಿ.ಪಿ.ಒ ಶ್ರೀ ವಿಜಯ ಕುಮಾರ್, ಬಾಕ್ರಬೈಲು  ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್, ಬಾಕ್ರಬೈಲು  ಶಾಲಾ ಯಂ.ಪಿ.ಟ.ಎ ಅಧ್ಯಕ್ಷೆಯಾದ  ಶ್ರೀಮತಿ ಶಶಿಕಲಾ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್, ಯಸ್.ಯಸ್.ಜಿ .ಸದಸ್ಯರಾದ Ahammad Kunhi ಇವರು ಭಾಗವಹಿಸಿ ಶುಭಾಶಂಸನೆಗೈದರು.

      \  ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವರ್ಕಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ.ಪಿ.ಬಿ.ಅಬೂಬಕ್ಕರ್ ವಹಿಸಿದ್ದರು.ಅವರು ತಮ್ಮ ಭಾಷಣದಲ್ಲಿ,"ಇಂದಿನ ಮಕ್ಕಳೇ ಮುಂದಿನ ಜನಾಂಗ"ಆದ್ದರಿಂದಮಕ್ಕಳು ಈ ಸ್ಕೌಟ್ ಶಿಬಿರದಲ್ಲಿ ಭಾಗವಹಿಸಿ  ದೇಶಪ್ರೇಮ, ಸಹಬಾಳ್ವೆ, ಸಹನೆ, ಪರೋಪಕಾರ ಇವೇ ಮೊದಲಾಮಾನವೀಯ ಗುಣಗಳನ್ನು ಈ ಶಿಬಿರದ ಮೂಲಕ ಬೆಳೆಸಿಕೊಳ್ಳುವಂತಾಗಲಿ ಎಂದು ಕರೆ ನೀಡಿ ಈ ಸ್ಕೌಟ್ RALLYಯು ಯಶಸ್ಸು ಪಡೆಯುವಂತಾಗಲಿ ಎಂದು ಶುಭಹಾರೈಸಿದರು.


      ಮಂಜೇಶ್ವರ ಉಪಜಿಲ್ಲೆಯ ಒಂಭತ್ತು ಶಾಲೆಗಳಿಂದ ಆಗಮಿಸಿದ ಸ್ಕೌಟ್ &ಗೈಡ್ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಲಾಯಿತು.ಈ ಶಿಬಿರದಲ್ಲಿ ಒಟ್ಟು 251 ಶಿಬಿರಾರ್ಥಿಗಳು ಭಾಗವಹಿಸಿದ್ದರು.ಸ್ಕೌಟ್ ವಿದ್ಯಾರ್ಥಿಗಳು ತಮಗೆ ಬೇಕಾದ ಗುಡಾರಗಳನ್ನು ಶಾಲಾ ಮೈದಾನದಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿದರು.ಸಂಜೆ 5.೦೦ ಗಂಟೆಗೆ ಶಿಬಿರಾರ್ಥಿಗಳು ಫ್ರೆಂಡ್ ಶಿಪ್ ಗೇಮ್ ಆಡಿದರು.ಸಂಜೆ 6.೦೦ ಗಂಟೆಗೆ ಶಿಬಿರಾರ್ಥಿಗಳು ದೇಶ ಭಕ್ತಿಗೀತೆ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.ರಾತ್ರಿ ೮.೦೦ ಗಂಟೆಗೆ ಶಿಬಿರಾಗ್ನಿ ಚಟುವಟಿಕೆ ನಡೆಯಿತು.ಈ ಎಲ್ಲಾ ಚಟುವಟಿಕೆಗಳು  ಭಾರತ್ ಸ್ಕೌಟ್ಸ್ & ಗೈಡ್ಸ್ ಸಹಾಯಕ ಜಿಲ್ಲಾ ಕಮಿಷನರ್ (ಎ.ಡ.ಸಿ) ಸ್ಕೌಟ್ ತರಬೇತುದಾರರಾದ ಶ್ರೀ ವಿನೋದ್ ಕುಮಾರ್ ಚೇವಾರ್ ಇವರ ನೇತೃತ್ವದಲ್ಲಿ ಜರಗಿತು. 
















        ಬಾಕ್ರಬೈಲು ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಅತಿಥಿಗಳನ್ನು ಸ್ವಾಗತಿಸಿದರು.ಶಾಲಾ ಸಹಾಯಕ ಅಧ್ಯಾಪಕರಾದ ಶ್ರೀ. ಬಿ.ಮೋಹನ ಇವರು ಕಾರ್ಯಕ್ರಮ ನಿರೂಪಿಸಿದರು.ಶ್ರೀ.ಸತ್ಯನಾರಾಯಣ ಭಟ್ ಮುಖ್ಯೋಪಾಧ್ಯಾಯರು ಎ.ಯು.ಪಿ.ಶಾಲೆ ಆನೆಕಲ್ಲು, Treasurer, Bharat Scouts & Guides Manjeshwar Local Association ಇವರು ಅತಿಥಿಗಳನ್ನು ವಂದಿಸಿದರು.