welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Tuesday 28 October 2014

ವಿದ್ಯಾರಂಗ

2014-15 ನೇಸಾಲಿನ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಯು.ಪಿ.ವಿಭಾಗದ ವರ್ಣಚಿತ್ರ ರಚನಾ ಸ್ಪರ್ಧೆಯಲ್ಲಿ ಶ್ರೀನಿಧಿ.ಪಿ.VII ನೇ ತರಗತಿ ಇವರು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.

Monday 27 October 2014

"ಸಾಕ್ಷರ - 2014"-ಮೌಲ್ಯಮಾಪನ








“ಸಾಕ್ಷರ -2014" ಇದರ ಮೂರನೇ ಹಂತದ ಮೌಲ್ಯಮಾಪನ ಚಟುವಟಿಕೆಯನ್ನು ದಿನಾಂಕ 27-10-14ರಂದು ನಡೆಸಲಾಯಿತು.

Saturday 25 October 2014

ತರಕಾರಿ ತೋಟ





ವರ್ಕಾಡಿ ಪಂಚಾಯತಿನ ಕೃಷಿ ಭವನದಿಂದ ವಿತರಿಸಲ್ಪಟ್ಟ ತರಕಾರಿ ಬೀಜಗಳಾದ ಬೆಂಡೆ,ಅಲಸಂಡೆ,ಸೋರೆಕಾಯಿ,ಇತ್ಯಾದಿಬೀಜಗಳನ್ನು ಶಾಲಾ ಕೈತೋಟದಲ್ಲಿ ಬಿತ್ತಲಾಯಿತು.ಅದೇ ರೀತಿ  ಇಕೋಕ್ಲಬ್ ನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಸಹಯೋಗದೊಂದಿಗೆ ದಿನಾಂಕ 14-10-2014 ರಂದು ಬದನೆ,ಮೆಣಸು,ಹರಿವೆ ಮುಂತಾದುವುಗಳನ್ನು ನೆಡಲಾಯಿತು. 

"ವಿಶ್ವಸಂಸ್ಥೆ " ದಿನಾಚರಣೆ


ದಿನಾಂಕ 24-10-2014 ರಂದು ನಮ್ಮ ಶಾಲೆಯಲ್ಲಿ ವಿಶ್ವಸಂಸ್ಥೆಯ ದಿನವನ್ನು ಆಚರಿಸಲಾಯಿತು.ಸಮಾಜ ಅಧ್ಯಾಪಕರಾದ ಗಣೇಶ್ ಕುಮಾರ್ ರವರು ವಿಶ್ವಸಂಸ್ಥೆ ಉದಯವಾಗಲು ಕಾರಣಗಳು ಹಾಗೂ ವಿಶ್ವಸಂಸ್ಥೆಯ ಪ್ರಧಾನ ಅಂಗಗಳು, ಸುಮಾರು ಅದರ 20ರಷ್ಟು ಸೇವಾ ಸಂಸ್ಥೆಗಳ ಪರಿಚಯ ಹಾಗೂ ಈಗ ಅವುಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಯು.ಪಿ.ವಿಧ್ಯಾರ್ಥಿಗಳಿಗೆ ಸೂಕ್ತವಾದ ಮಾಹಿತಿಯನ್ನು ನೀಡಿದರು.

Monday 20 October 2014

ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳ






2014-15 ನೇ ವರ್ಷದ ಶಾಸ್ತ್ರ ಮೇಳದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಿಯಾದ ವಿಧ್ಯಾರ್ಥಿಗಳಿಗೆ ನಮ್ಮ ಶಾಲಾ  ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಅಸ್ಸೆಂಬ್ಲಿ ಯಲ್ಲಿ ಬಹುಮಾನವನ್ನು ವಿತರಿಸಿದರು

ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಯು.ಪಿ.ವಿಭಾಗದ ವರ್ಕಿಂಗ್ ಮೋಡೆಲ್ ನಲ್ಲಿ ಎ ಗ್ರೇಡ್ ನೊಂದಿಗೆ  ದ್ವಿತೀಯ ಸ್ಥಾನವನ್ನು ಲತೇಶ್ ಸಾಂತಾ ಏಳನೇ ತರಗತಿ ಮತ್ತು ಸಫಾ ಏಳನೇ ತರಗತಿ ಇವರು ಪಡೆದು ಜಿಲ್ಲಾ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ.

ಉಪಜಿಲ್ಲಾ ಮಟ್ಟದ ಸಮಾಜ-ವಿಜ್ಞಾನ ಮೇಳದಲ್ಲಿ ಯು.ಪಿ.ವಿಭಾಗದ Still model item ನಲ್ಲಿ A Grade ನೊಂದಿಗೆ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿನಿಯರಾದ ಕುಮಾರಿ ಸಾರಾಸುನೈನ ಮತ್ತು ಖದೀಜತ್ ಮನ್ಸೂರ ಆರನೇ ತರಗತಿ.


ಉಪಜಿಲ್ಲಾ ಮಟ್ಟದ ಗಣಿತ ಮೇಳದಲ್ಲಿ ಎಲ್.ಪಿ.ಮಟ್ಟದ Magazine ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತೇವೆ. Puzzle ವಿಭಾಗದಲ್ಲಿ A Grade ನೊಂದಿಗೆ ತೃತೀಯ ಸ್ಥಾನವನ್ನು ಮೊಹಮ್ಮದ್ ಅಫಸಲ್ ಮೂರನೇ ತರಗತಿ,Geomatric Chart ವಿಭಾಗದಲ್ಲಿ  A Grade ನೊಂದಿಗೆ ತೃತೀಯ ಸ್ಥಾನವನ್ನು ಸುಮನ.ಯನ್. ಮೂರನೇ ತರಗತಿ ಇವರು ಗಳಿಸಿರುತ್ತಾರೆ.ಅಲ್ಲದೆ ಯಲ್.ಪಿ.ವಿಭಾಗದಲ್ಲಿ ದ್ವಿತೀಯ ಚಾಂಪಿಯನ್ ಶಿಪ್ ನ್ನೂ ಪಡೆದಿರುತ್ತೇವೆ. ಯು.ಪಿ.ವಿಭಾಗದ ನಂಬರ್ ಚಾರ್ಟ್ ನಲ್ಲಿ ಫಾತಿಮತ್ ಜಾಫಿರ ಏಳನೇ ತರಗತಿ ಇವಳು A Grade ನೊಂದಿಗೆ ತೃತೀಯ ಸ್ಥಾನವನ್ನು ಗಳಿಸಿರುತ್ತಾಳೆ. 
ಯು.ಪಿ.ವಿಭಾಗದ ವೃತ್ತಿ ಮೇಳದ PALM LEAVES ನಲ್ಲಿ ದಿಶಾ.ಯಂ.ಯಚ್. ಸತತವಾಗಿ 5 ನೇ ಬಾರಿಗೆ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ

ಹಾಗೆಯೇ ಎಲ್.ಪಿ.ವಿಭಾಗದ ಅಲೀಮಾ ನಾಲ್ಕನೇ ತರಗತಿ ಪಾಮ್ ಲೀವ್ಸ್  ಪ್ರೊಡಕ್ಟ್ ನಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.

Wednesday 15 October 2014

ಜಾದೂ ಪ್ರದರ್ಶನ





ದಿನಾಂಕ 13-10-2014 ರಂದು ಶ್ರೀ ಗೋಪಾಲಕೃಷ್ಣ ಶೆಣೈ ಉಡುಪಿ ಇವರು ನಮ್ಮ ಶಾಲಾ ವಿಧ್ಯಾರ್ಥಿಗಳಿಗೆ ಸುಮಾರು 40 ತರಹದ ಜಾದೂ ಪ್ರದರ್ಶನವನ್ನು ಮಾಡಿ ಮಕ್ಕಳನ್ನು ವಿಸ್ಮಯಗೊಳಿಸುವುದರೊಂದಿಗೆ ಮನ ರಂಜಿಸಿದರು. ಕೆಲವೊಂದು ಜಾದೂಗಳನ್ನು  ಮಕ್ಕಳು ಸ್ವತಃ ಮಾಡುವಂತೆ ಪ್ರೇರೇಪಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದರೆ ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಇವರು ಧನ್ಯವಾದಗೈದರು. 

Saturday 11 October 2014

ಬ್ಲಾಗ್ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ಷಕ-ಶಿಕ್ಷಕ ಸಭೆ











2014-2015 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲಾ ಬ್ಲಾಗ್ ಉದ್ಘಾಟನಾ ಕಾರ್ಯಕ್ರಮ ಹಾಗೂ ಮಕ್ಕಳ ಕಲಿಕಾಭಿವೃದ್ಧಿ ದಾಖಲೆಯ ಸೂಕ್ತ ಮಾಹಿತಿಯನ್ನು ರಕ್ಷಕರಿಗೆ ನೀಡುವರೆ ರಕ್ಷಕ-ಶಿಕ್ಷಕ ಸಭೆಯನ್ನು ದಿನಾಂಕ 10-10-2014 ರಂದು ಏರ್ಪಡಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಇ.ಯಂ. ಇಬ್ರಾಹಿಂ ಅವರು ವಹಿಸಿಕೊಂಡರು.ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಇವರು ಪ್ರಾಸ್ತಾವಿಕ ನುಡಿಯನ್ನಾಡಿದರು.ಬಳಿಕ ಅಂದಿನ ಅತಿಥಿಗಳಾದ ಶ್ರೀ.ಪಿ.ಬಿ.ಅಬೂಬಕರ್ ಪ್ರಭಾರ ಅಧ್ಯಕ್ಷರು ವರ್ಕಾಡಿಗ್ರಾಮ ಪಂಚಾಯತ್ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನಂತರ ಶಾಲಾ ಸಹಾಯಕ ಅಧ್ಯಾಪಿಕೆಯಾದ ಶ್ರೀಮತಿ ಚಂದ್ರಿಕಾ.ಕೆ.ಆರ್ ಇವರು ಪ್ರಥಮ ಟರ್ಮ್ ಮೌಲ್ಯಮಾಪನದ ಫಲಿತಾಂಶ ಹಾಗೂ ಹೊಸ ಶಿಕ್ಷಣ ಪದ್ಧತಿಯಲ್ಲಿ ನೀಡುವ ಗ್ರೇಡಿನ ಬಗ್ಗೆ ರಕ್ಷಕರಿಗೆ ಸ್ಫಷ್ಟ ಮಾಹಿತಿಯನ್ನು ನೀಡಿದರು.ಬಳಿಕ ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ನಡಿಬೈಲು ಇವರು ಈ ಬ್ಲಾಗ್ ನಿಂದ ಎಲ್ಲರಿಗೂ ಶಾಲಾ ಕಾರ್ಯಕ್ರಮ ಹಾಗೂ ಕಲಿಕಾ ಅಭಿವೃಧ್ಹಿಯ ಬಗ್ಗೆ ತಿಳಿಯುವಂತಾಗಿದೆ, ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಶುಭಹಾರೈಸಿದರು.ತರುವಾಯ ಪಿ.ಟಿ.ಎ.ಅಧ್ಯಕ್ಷರಾದ ಇ.ಯಂ.ಇಬ್ರಾಹಿಂ ಇವರು ಈ ಬ್ಲಾಗ್ ರಕ್ಷಕರಿಗೆ ಶಾಲೆಯ ಹಾಗೂ ಇಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡುವಲ್ಲಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಯಂ.ಪಿ.ಟಿ.ಎ.ಅಧ್ಯಕ್ಷೆಯಾದ ಶ್ರೀಮತಿ ಶಶಿಕಲಾ ಹಾಗೂ ಯಂ.ಪಿ.ಟಿ.ಎ.ಉಪಾಧ್ಯಕ್ಷೆಯಾದ ಶ್ರೀಮತಿ ಶೋಭಾ ಆರ್ವಾರ್ ಇವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಅತಿಥಿಗಳನ್ನು ಶ್ರೀಮತಿ ಶೈಲಜಾರವರು ಸ್ವಾಗತಿಸಿದರೆ ಶ್ರೀ ಗಣೇಶ್ ಕುಮಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದ ಕೊನೆಗೆ ಶ್ರೀಮತಿ ಹೇಮಲತಾ ಇವರು ಧನ್ಯವಾದ ಸಮರ್ಪಿಸಿದರು

Tuesday 7 October 2014

ವಿಧ್ಯಾರ್ಥಿಗಳಿಗೆ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮ

 



 ವರ್ಕಾಡಿ ಕೃಷಿ ಭವನದ ಸಹಾಯಕ ಕೃಷಿ ಅಧಿಕಾರಿಗಳಾದ ಶ್ರೀ ರಾಧಾಕೃಷ್ಣನ್ ಹಾಗೂ ಆಫೀಸು ಸಿಬ್ಬಂದಿಗಳಾದ ಜನಾರ್ಧನನ್ ಇವರು ನಮ್ಮ ಶಾಲೆಗೆ ಆಗಮಿಸಿ ವಿವಿಧ ರೀತಿಯ ತರಕಾರಿ ಬೀಜಗಳನ್ನು ವಿಧ್ಯಾರ್ಥಿಗಳಿಗೆವಿತರಿಸಿ ಸೂಕ್ತ ಮಾಹಿತಿ ನೀಡಿದರು. ಈ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಹಿರಿಯಅಧ್ಯಾಪಕರಾದ ವಿ.ಮಾಧವ ನಾವಡ ಅವರು ವಹಿಸಿದ್ದರು.ಸಹಾಯಕ ಅಧ್ಯಾಪಕರಾದ ಶ್ರೀ.ಬಿ.ಮೋಹನ ಅವರು ಸ್ವಾಗತಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಚಂದ್ರಿಕಾರವರು ಧನ್ಯವಾದ ಸಮರ್ಪಿಸಿದರು.

ಗಣಿತದ ಆಕೃತಿಗಳು ಎಷ್ಟೊಂದು ಸೊಗಸು?











ಶಾಲಾ ವಿಧ್ಯಾರ್ಥಿಗಳು ವಿವಿಧ ಸಂದರ್ಭಗಳಲ್ಲಿ ರಚಿಸಿದ ಗಣಿತದ ಆಕೃತಿಗಳು